BelagaviDistrictHaveriLatest

ಲೋಕೋಪಯೋಗಿ ಇಲಾಖೆಯಲ್ಲಿ ಸರಕಾರಿ ಉದ್ಯೋಗ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ:

ರಾಣೆಬೇನ್ನೂರು : ಲೋಕೋಪಯೋಗಿ ಇಲಾಖೆಯಲ್ಲಿ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ರಾಣೆಬೇನ್ನೂರು ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

Oplus_0

ರೋಹಿತ್ ಯಶವಂತ ಗುತ್ತಲ ಎಂಬ ವ್ಯಕ್ತಿ ಸಚಿವೆ ಲಕ್ಷ್ಮೀ ಹೇಬ್ಬಾಳ್ಕರ್, ಹಿರಿಯ ಅಧಿಕಾರಿಗಳು, ರಾಜಕಾರಣಿಗಳೊಂದಿಗೆ ತಾನು ತೆಗೆಸಿಕೊಂಡ ಪೋಟೋ ತೋರಿಸಿ ಯುವಕ – ಯುವತಿಯರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಸರಕಾರಿ ನೌಕರಿ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿದ್ದು ಬೆಳಕಿಗೆ ಬಂದಿದೆ. ಪ್ರತಿಯೊಬ್ಬರಿಂದ 10 ರಿಂದ 13 ಲಕ್ಷ ಹಣ ಹಾಕಿಸಿಕೊಂಡಿದ್ದ ಎನ್ನಲಾಗಿದೆ‌. ಸಧ್ಯ 18 ಜನರಿಂದ 68,20,775 ರೂಪಾಯಿ ವಂಚನೆ ಆಗಿರುವುದು ದೂರಿನಲ್ಲಿ ದಾಖಲಾಗಿದೆ.

Oplus_0

ಪೂರ್ತಿ ಹಣ ನೀಡಿದವರಿಗೆ ನಕಲಿ ಆದೇಶ ಪತ್ರ: ಸರಕಾರಿ ಉದ್ಯೋಗ ಕೊಡಿಸುವ ಆಮಿಷ್ಯವೊಡ್ಡಿ ಪೂರ್ತಿ ಹಣ ನೀಡಿದವರಿಗೆ ದಾವಣಗೆರೆ ಲೋಕೋಪಯೋಗಿ ಇಲಾಖೆಗೆ ಹೋಗಿ ಜಾಯಿನ್ ಆಗಿ ಎಂದು ನಕಲಿ ಆದೇಶ ಪತ್ರ ನೀಡಿದ್ದ ಎನ್ನಲಾಗಿದೆ.

Oplus_0

ಆದೇಶ ಪತ್ರ ಹಿಡಿದು ಕೆಲಸಕ್ಕೆ ಸೇರಲು ಹೋದಾಗ ವಂಚನೆಗೊಳಗಾಗಿದ್ದು ಬಯಲಿಗೆ ಬಂದಿದೆ. ವಂಚನೆಗೊಳಗಾದವರು ರೋಹಿತ್ ವಿರುದ್ದ ರಾಣೇಬೆನ್ನೂರು ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ.2021 ರಿಂದ ಹಂತ ಹಂತವಾಗಿ ಯುವಕ- ಯುವತಿಯರಿಂದ ಹಣ ಹಾಕಿಸಿಕೊಂಡು ಬಂದಿದ್ದಾನೆ.ಸಧ್ಯ 18 ಜನ ವಂಚನೆಗೊಳಗಾದವರಿಂದ ದೂರು ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial