
ಹಾವೇರಿ: ನಗರದ ಹೊರವಲಯದ ಕೇರಿಮತ್ತಿಹಳ್ಳಿ ರಸ್ತೆಯಲ್ಲಿ ಇರುವ ಚೌಡೇಶ್ವರಿ ದೇವಸ್ಥಾನದ ಪಿಳಲಿ ಮರ ಬಿರುಗಾಳಿ ಸಹಿತ ಮಳೆಗೆ ಧರಗೆ ಉರುಳಿ ಬಿದ್ದಿದೆ.
ಹಾವೇರಿಯಲ್ಲಿ ಮತ್ತೆ ಮುಂದುವರಿದ ಮಳೆ ಆವಾಂತರ ಹೆಚ್ಚಾಗಿದ್ದು, ಬಾರೀ ಮಳೆಗೆ ಪ್ರಸಿದ್ಧ ಮರ ನೆಲಕ್ಕೆ ಉರುಳಿ ಬಿದ್ದಿದೆ. ಮಳೆ ಬರುವ ಹಿನ್ನಲೆ ದೇವಸ್ಥಾನದ ಬಳಿಕ ಬೈಕ್ ಹಾಗೂ ಕಾರ್ ನಿಲ್ಲಿಸಿ ಆಶ್ರಯ ಪಡೆದಿದ್ದ ಸಾರ್ವಜನಿಕರ ವಾಹನಗಳ ಮೇಲೆ ಕಾರು ಮತ್ತು ಬೈಕ್ ಮೇಲೆ ಬೃಹತ್ ಮರ ಬಿದ್ದಿದ್ದು,
ಈ ಹಿನ್ನೆಲೆ ಕಾರು ಮತ್ತು ಬೈಕ್ ಗಳೆರಡು ನುಜ್ಜುಗುಜ್ಜಾಗಿ ಜಖಂಗೊಂಡಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಪ್ರಸಿದ್ದ ದೇವರ ಮರ ಧರಗೆ ಉರುಳಿದಕ್ಕೆ ಭಕ್ತರಲ್ಲಿ ಆತಂಕ ಮನೆ ಮಾಡಿದೆ.