
ಹಾವೇರಿ: ತಾಲೂಕಿನ ಅರಳಳ್ಳಿ ಬಳಿಯ ತುಂಗಭದ್ರ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಂಬಂಧಿಸಿದಂತೆ, ಗ್ರಾಮಸ್ಥರು ಹಾಗೂ ಅಕ್ರಮ ಮರಳು ದಂಗೆಕೋರರ ಗಲಾಟೆ ನಡೆದಿದ್ದು, ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸದಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ಅರಳಳ್ಳಿ ಗ್ರಾಮದಲ್ಲಿ ಹಾಯ್ದು ಹೋಗಿರುವ ತುಂಗಭದ್ರಾ ನದಿಯಲ್ಲಿ ಗುಣಮಟ್ಟದ ಮರಳು ಲಭ್ಯವಾಗುತ್ತಿದೆ. ಇಲ್ಲಿನ ಮರಳಿಗೆ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ಕಾರಣದಿಂದಲೇ ಇಲ್ಲಿ ಮರಳು ತೆಗೆಯಲು ಸಾಕಷ್ಟು ಪೈಪೋಟಿ ಇದೆ. ಹೆಚ್ಚಿನ ಮರಳು ತೆಗೆಯಲು ಕೆಲವರು ಬಿಹಾರಿ ಕಾರ್ಮಿಕರನ್ನು ಕರೆತಂದು ನದಿಯಲ್ಲಿ ನೀರಿದ್ದರು, ಮರಳು ತೆಗೆಯುವಂತ ಕೆಲಸಕ್ಕೆ ಮುಂದಾಗಿದ್ದಾರೆ.

ಇದೇ ವಿಚಾರಕ್ಕೆ ಈಗ ನದಿಯ ತಟದಲ್ಲಿ ಅಕ್ರಮ ಮರಳು ದಂಗೆಕೋರರು ಗಾಗೂ ಗ್ರಾಮಸ್ಥರು ಮಧ್ಯ ವಾಗ್ವಾದ ನಡೆದು, ಗಲಾಟೆಯಾಗಿದೆ. ಮರಳು ದಂಧೆ ಮಾಡುವ ಒಂದು ಗುಂಪು ಮರಳು ತೆಗೆಯಲು ಮುಂದಾದರೆ, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.ಯಾವುದೇ ಕಾರಣಕ್ಕೂ ನದಿಯಲ್ಲಿ ಮರಳು ತೆಗೆಯದಂತೆ ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರ ಎಚ್ಚರಿಕೆಯನ್ನು ಕಡೆಗಣಿಸಿ ಮರಳು ತೆಗೆಯಲು ಮುಂದಾದ ಅಕ್ರಮ ಮರಳು ದಂಗೆಕೋರರ ಗುಂಪಿನ ಜನರೊಂದಿಗೆ ಹಾಗೂ ಗ್ರಾಮಸ್ಥರ ಮಧ್ಯ ವಾಗ್ವಾದ ನಡೆದು, ವಾಕ್ ಸಮರ ತಾರಕ್ಕಕ್ಕೆ ಏರಿದಿದೆ.ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.