DistrictHaveriLatestNews

ಅಂಬೇಡ್ಕರ್‌ಗೆ ಅಪಮಾನಗೃಹಸಚಿವರ ವಜಾಕ್ಕೆ ಕಾಂಗ್ರೆಸ್ ಮುಖಂಡಉಮೇಶ್ ಮಾಳಗಿ ಒತ್ತಾಯ

ಹಾನಗಲ್ : ರಾಜ್ಯಸಭೆಯಲ್ಲಿ ದೇಶದ ಗೃಹಮಂತ್ರಿ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಅವಮಾನಕರ ವಾಗಿ ಮಾತನಾಡಿರುವುದು ಖಂಡನೀಯ. ಅವರನ್ನು ಸಂಸದರ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡರಾದ ಉಮೇಶ್ ಮಾಳಗಿ ಅವರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಅಮಿತ್ ಶಾ ಅಂಬೇಡ್ಕರ್
ರವರ ಬಗ್ಗೆ ಅವಮಾನಕವಾಗಿ ಮಾತನಾಡಿ, ಅವರನ್ನು ಭಾರತದ ಪ್ರಧಾನ ಮಂತ್ರಿಗಳು ಸೇರಿದಂತೆ ಕೇಂದ್ರ ಸಚಿವ ಸಂಪುಟ ಬೆಂಬಲಿಸಿರುವುದು ಖಂಡನೀಯವಾಗಿದೆ. ಸಂವಿಧಾನದಿಂದ ರಕ್ಷಣೆ ಪಡೆಯುತ್ತಿರುವ ಸಾರ್ವಜನಿಕರು, ಈ ಸಂವಿಧಾನ ವಿರೋಧಿ ಬಿಜೆಪಿ ಪಕ್ಷವನ್ನು ಕಿತ್ತೆಸೆಯಬೇಕೆಂದು ಕರೆಕೊಟ್ಟರು. ಬಿಜೆಪಿ ಮೊದಲಿನಿಂದಲೂ ಸಂವಿಧಾನ ಬದಲಾವಣೆಗಾಗಿ ಹುನ್ನಾರ ನಡೆಸಿದೆ. ಸಂವಿಧಾನ ವಿರೋಧಿ ಪಕ್ಷವಾಗಿದೆ. ಡಾ.ಬಿ.ಆರ್. ಅಂಬೇಡ್ಕರ್‌ರವರ ಸಂವಿಧಾನದಿಂದಲೇ ಅಧಿಕಾರಕ್ಕೆ ಬಂದು ಅವರನ್ನೇ ಕಡೆಗಣಿಸಿ ಮಾತನಾಡುವ ಹೀನ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿಯ ರಾಜಕೀಯ ದುರುದ್ದೇಶವನ್ನು ಖಂಡಿಸಿ ಭಾರತದ ನಾಗರಿಕರು ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial