DistrictGadagHaveriLatestState

ಕಾಂಗ್ರೆಸ್‌ನವರ ಮೊದಲು ಬಜೆಟ್ ಕಾಫಿ ಓದಿಕೊಳ್ಳಬೇಕು: ಸಂಸದ ಬಸವರಾಜ ಬೊಮ್ಮಾಯಿ

ಹಾವೇರಿ: ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಮಲತಾಯಿ ಧೋರಣೆ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಹಾವೇರಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದು,ಕಾಂಗ್ರೆಸ್ ನವರು ಮೊದಲು ಬಜೆಟ್ ಕಾಫಿಯನ್ನು ಪೂರ್ಣ ಓದಿಕೊಳ್ಳಬೇಕು ಎಂದು ಹೇಳಿದರು.
ಹಾವೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು,ಯಾವ್ಯಾವ ಇಲಾಖೆಗೆ ಎಷ್ಟು ದುಡ್ಡು ಬಂದಿದೆ? ಈ ಹಿಂದೆ ಅದೇ ಅಕೌಂಟ್‌ಗೆ ಯುಪಿಎ ಸರ್ಕಾರ ಇದ್ದಾಗ ಎಷ್ಟು ಬಂದಿತ್ತು? ಎಂದು ಮೊದಲು ಜನರಿಗೆ ತಿಳಿಸಲಿ.ಈ ವಿಚಾರದಲ್ಲಿ ಕಾಂಗ್ರೆಸ್ ನವರು ಜನರನ್ನು ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದಾರೆ.ಅನುದಾನ ಬಂದೇ ಇಲ್ಲ ಅಂತಾರೆ.44870 ಕೋಟಿ ಹಣ ಡೆವಲ್ಯೂಷನ್ ಆಪ್ ಫಂಡ್ ನಲ್ಲಿ ಕರ್ನಾಟಕಕ್ಕೆ ಕೊಟ್ಟಿದಾರೆ.ಈ ಬಗ್ಗೆ ಸೋಮವಾರ ಎಲ್ಲಾ ಮಾಹಿತಿ ಬಿಡುಗಡೆ ಮಾಡುವೆ.ಕರ್ನಾಟಕದ ಪ್ರಗತಿಗೆ ಎಲ್ಲಾ ಕೊಟ್ಟಿದಾರೆ, ಇನ್ನಷ್ಟು ಕೊಡಬೇಕಿದೆ.ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೋಟಿ ಬಾಕಿ ಕೇಳಿದ್ದೇವೆ.ಕಾಂಗ್ರೆಸ್ ನವರು ಅಪಾದನೆ ಮಾಡ್ಕೊಂಡು ಕೂತಿದಾರೆ.ಅನುದಾನ ಹರಿಯಲು ಪ್ರಾರಂಭ ಆಗಿದೆ ಎಂದರು.

ಮೂಡಾ ಹಗರಣದ ಕುರಿತು
ನಾಳೆ ಬಿಜೆಪಿ – ಜಡಿಎಸ್ ಸಭೆ
ಇದೆ.ಸಭೆಯಲ್ಲಿ ಹೋರಾಟದ ರೂಪರೇಷ ಬಗ್ಗೆ ಚರ್ಚೆ ಮಾಡ್ತೀವಿ.ಮೂಡಾ ಹಗರಣದಲ್ಲಿ ತಪ್ಪಾಗಿಲ್ಲ ಅಂದರೆ ತನಿಕೆಗೆ ಯಾಕೆ ಕೊಟ್ಟಿದಾರೆ?ತನಿಖೆಯಿಂದ ಎಲ್ಲಾ ಗೊತ್ತಾಗಲಿದೆ.ಒಂದುವರೆ ವರ್ಷದಲ್ಲಿ ಮನೆ ಮುರುಕರು ಯಾರು ಎಂದು ಜನಕ್ಕೆ ಗೊತ್ತಾಗಿದೆ.ಮನೆ‌ಮುರುಕರು ಯಾರು ಅಂತ ಜನ ತೀರ್ಮಾನ ಮಾಡ್ತಾರೆ.ಜನ ಸರ್ಟಿಫಿಕೇಟ್ ಕೊಡ್ತಾರೆ ಎಂದರು.

Related Articles

Leave a Reply

Your email address will not be published. Required fields are marked *

Back to top button
Social media & sharing icons powered by UltimatelySocial