

ಹಾವೇರಿ: ಗಂಗಾಪರಮೇಶ್ವರಿ ದೇವಸ್ಥಾನದ ಕಳಸಾರೋಹಣದ ವೇಳೆ ಕ್ರೆನ್ ಬಕೆಟ್ ಕಳಚಿ, ವ್ಯಕ್ತಿಯೊಬ್ಬ ಮೃತ ಪಟ್ಟ ಘಟನೆ ಹಾನಗಲ್ ತಾಲೂಕಿನ ಶೇಷಗಿರಿಯಲ್ಲಿ ನಡೆದಿದೆ.

ಗ್ರಾಮದಲ್ಲಿ ನಿರ್ಮಾಣ ಮಾಡಿದ್ದ ದೇವಸ್ಥಾನದ ಕಳಸಾರೋಹಣವನ್ನು ಕ್ರೆನ್ ಮೂಲಕ ಮಾಡುವ ವೇಳೆ, ಕ್ರೆನ್ ಬಕೆಟ್ ಕಳಚಿ ಮಂಜುನಾಥ ಪಾಟೀಲ(40) ಮೃತ ಪಟ್ಟಿದ್ದಾನೆ. ಮಂಜು ಬಡಿಗೇರ (45) ಗಾಯಗೊಂಡಿದ್ದಾರೆ.ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.